Thursday, May 5, 2011

ಇದು ಮಾಧ್ಯಮ ಬದಲಾವಣೆ ಪರ್ವ ಕಾಲ

ಇದು ಮಾಧ್ಯಮ ಬದಲಾವಣೆ ಪರ್ವ ಕಾಲ. ರಂಗ ಮತ್ತು ರವಿ ಕಪ್ರದಿಂದ ಸುವರ್ಣಗೆ ಹೋದರು. ಚಾರ್ಮ್ ಕಳಕೊಂಡಿದ್ದ ಶಶಿಧರ ಭಟ್ಟರು ಹೊರಬಿದ್ದರು. ಕೆಲವೇ ತಿಂಗಳಲ್ಲಿ ಈ ಟೀವಿಯಾ ರಾಮೋಜಿ ರಾವ್ ಅವರ ಕೆಂಪು ಕಣ್ಣಿನ ಹುಡುಗ ಕೂಡ ಅಲ್ಲಿಂದ ಹೊರಬಂದರು.
ಸುವರ್ಣ ನ್ಯೂಸ್ ಬಕೆಟ್ ಕಥೆ ನಿಮಗೆ ಗೊತ್ಹಿದೆ. ರಂಗ ರವಿ ಕಥೆ ಗೊತ್ಹಿದೆ. ಆಮೇಲೆ ವಿ ಭಟ್ಟರು ವಿಕ ಬಿಟ್ಟರು. ಶಶಿಧರ ಭಟ್ಟರು ಸಮಯ ಸೇರಿದರು. ಸಮಯ ಸೇಲ್ ಆಗಿದ್ದು ಯಾವಾಗ ಅಲ್ಲಿಂದ ಹೊರಬೀಳುತ್ತಾರೆ ನೋಡಬೇಕು. ಪ್ರಜಾವಾಣಿಯಲ್ಲಿ ಅತೀ ಹೆಚ್ಚು ವರ್ಗಾವಣೆ ಅಗೀದೆ. ದಂಡಾವತಿ ಈಗ ಕಾರ್ಯಕಾರಿ ಸಂಪಾದಕ. ಗೇಮ್ expert ಗೋಪಾಲ ಆ ಸ್ಥಾನಕ್ಕೆ ಬಂದಿದ್ದಾರೆ. ದಿನೇಶ್ ಅಮೀನ್ ಮಟ್ಟು ತಮ್ಮ ಟೀಕಾ ಪ್ರಹಾರ ಮುಂದುವರಿಸಿದ್ದಾರೆ.
ಇಂಗ್ಲೀಷ್ ಗೆ ಬರೋಣ ಬಲರಾಮ್, ಕಾಮತ್, ರವಿ ಜೋಷಿ ಹೊಸ ಕಡೆಗೆ ಹೋದರು. ಮುಖ್ಯಮಂತ್ರಿಯ ಆಪ್ತ ವಲಯದ ಶಿವಮೊಗ್ಗದ ಅರುಣ್ ಪ್ರಶಸ್ತಿ ಮಾತ್ರ ಅಲ್ಲದೆ ಎಕ್ಷ ಪ್ರೆಸ್ ಸಂಪಾದಕ ಕೂಡ ಆಗಿ ಡಬ್ಬಲ್ ಲಾಟರಿ ಹೊಡೆದರು. ಅಲ್ಲಿರುವ ಪ್ರತಿಭಾವಂತ ಹುಡುಗ ರಾಜಶೇಖರನಿಗೆ ಯಾಕೋ ಕಿರಿ ಕಿರಿ.
ಮುಂದಿನ ದಿನಗಳಲ್ಲಿ ಸುವರ್ಣ ನ್ಯೂಸ್ ಹೊಸ ಮುಖ ಬರಲಿದ್ದಾರೆ.ಬಲರಾಮ್ ಹೊಸ ಟೀಂ ಕಟ್ಟಲಿದ್ದಾರೆ. ಸಮಯದಲ್ಲಿ ಕೂಡ ಎಡಪಂಥಿಯರು ಹೊರನಡೆದು ಬಳಪಂಥಿಯರಿಗೆ ಅವಕಾಶ ನೀಡಲಿದ್ದಾರೆ. ವಿಜಯ್ ಸಂಕೇಶ್ವರ್ ಅವರ ಹೊಸ ಪೇಪರ್ ಶೀಘ್ರ ಬರಲಿದೆ. ರಾಜ್ ಟೀವಿ ಬರಲಿದೆ. ಏನ್ ಡಿ ಟೀವಿ,p7 ಚಾನೆಲ್ಲುಗಳು ಬರಲಿದೆ. ಉದಯಕ್ಕೆ ಹೊಸ ಆಡಳಿತ ಸಾರಥಿ ಬರಲಿದ್ದಾನೆ.ಹೈದ್ರಾಬಾದ್ ನ ರಾಮೋಜಿ ಫಿಲ್ಮ್ ಸಿಟಿಯಲ್ಲಿ ಈ ಟಿವಿ ಕನ್ನಡ ನ್ಯೂಸ್ ಮುಖ್ಯಸ್ಥ ಜಗದೀಶ ಮಣಿಯಾನಿಯ ಲೈಂಗಿಕ ಕಿರುಕುಳಗಳಿಂದ ಅನೇಕರು ಕೆಲಸ ಬಿಟ್ಟು ಬೇರೆ ಚಾನೆಲ್ ಗಳಿಗೆ ತೆರಳಿದ್ದಾರೆ.ಇನ್ನೂ ಹೋಗುವರಿದ್ದಾರೆ. ಈಗಾಗಲೇ ಕಳಪೆ ಪ್ರದರ್ಶನ ನೀಡುತ್ತಿರುವ ಈ ಟೀವಿ ಕನ್ನಡ ನ್ಯೂಸ್ ಸೆಕ್ಷನ್ ಬಂದ್ ಆಗಲಿದೆ ಅಥವಾ ಬೇರೆಯವರಿಗೆ ಕೊಡುವ ಅಂದರೆ outsource ಸಾಧ್ಯತೆ ಕೂಡ ಇದೆ. ಮಿಡ್ ಡೇ ರೀ ಲಾಂಚ್ ಆಗಲಿದೆ.
ಅನೇಕ ತಲೆಗಳು ಉರುಳಲಿವೆ ಅಥವಾ ಹಾoಡ್ಸ್ ಹೋಗಲಿವೆ. ಹಲವರು ವೃತ್ತಿ ಬಿಡಲಿದ್ದಾರೆ, ಬಿಡುತಿದ್ದಾರೆ. ಅಂತು ಇದು ಸಂಪಾದಕರಿಗೆ ಪತ್ರಕರ್ತರಿಗೆ ಒಳ್ಳೆ ಕಾಲ.
ಕೃಪೆ:Mediablog.blog

No comments: