ನಮ್ಮ ತಂಗಿಯರೇ,
ನಮ್ಮ ಮೆಟ್ರೋಗಳ ಮೂಲೆಯ ಗುಬ್ಬಚ್ಚಿ ಗೂಡುಗಳಲ್ಲಿ ಅರಳುವ, ಇನ್ನೂ ಬೆಚ್ಚನೆ ಕನಸು ಕಾಣುತ್ತಿರುವ ಅಸಂಖ್ಯ ಅಶ್ವಿನಿಯರೇ...
ಇಂದು ಪ್ರೇಮಿಗಳ ದಿನವಂತೆ...ಪೇಪರುಗಳಲ್ಲಿ ಟಿವಿಗಳಲ್ಲಿ ಅದರದ್ದೇ ಸುದ್ದಿ...ಯಾರೋ ಮುತಾಲಿಕ್ ಪ್ರೇಮಿಯರು ಅಸಭ್ಯ ವರ್ತಿಸಿದರೆ ತಾಳಿ ಕಟ್ಟಿಸುತ್ತಾನಂತೆ...ಇನ್ಯಾರೋ ತೆಹಲ್ಕಾದ ಸೂಸಾನ್ ಎಂಬಾಕೆ ದೇಶದೆಲ್ಲೆಡೆ ರಾಮಸೇನೆಯವರಿಗೆ ಚಡ್ಡಿ ಕಳಿಸುತ್ತಾರಂತೆ...
ನೋಡ್ತೀರಲ್ಲ...ಇವೇ ಇಂದು ಸುದ್ದಿಯಾಗ್ತಿರೋದು...ನಮಗ್ಗೊತ್ತು...ಪಬ್ಬುಗಳಲ್ಲಿ ತೂರಾಡುವ ಹುಡುಗ ಹುಡುಗಿಯರನ್ನು ನೋಡುವಾಗ ನಿಮಗೂ ಆ ಬಣ್ಣದ ಬದುಕು ಇಷ್ಟವಾಗಬಹುದು. ಬೇಡ್ರಮ್ಮ....ಅಣ್ಣಂದಿರಾಗಿ ಹೇಳುತ್ತೇವೆ...ನಿಮಗೆ ಸ್ವಾತಂತ್ರ್ಯ ಇದೆ ಗೊತ್ತು...ಆದರೆ 'ಅಂತಹ' ಸ್ವಾತಂತ್ರ್ಯದಿಂದ ಯಾರೂ ಉದ್ಧಾರವಾಗಲ್ಲ, ನೀವೂ ಅಲ್ಲ, ಪಬ್ಬಿನವರೂ, ಅಲ್ಲಿಗೆ ಬರುವ ಹುಡುಗರೂ ಇರಬಹುದೇನೋ.
ಮೇಲುವರ್ಗದವರಿಗೆ ಇವೆಲ್ಲ ಸಹಿಸುವುದು ಕಷ್ಟ...ಅದರಲ್ಲೂ ಮಹಿಳೆಯರಿಗೆ, ಇಲೈಟ್ ಸೊಸೈಟಿಯವರಿಗೆ, ಪೇಜ್-3ಗಳಿಗೆ ನಮ್ಮ ಮಹಿಳಾ ಆಯೋಗಗಳು, ರಾಷ್ಟ್ರೀಯ ಮಾಧ್ಯಮಗಳು ನೆರವಾಗುತ್ತವೆ. ಎಂತಹ ಕಪಿಚೇಷ್ಟೆ ಮಾಡಿದರೂ ಇಲ್ಲಿ ಮಾರಣಹೋಮ ನಡೆದಿದೆ ಎಂಬಷ್ಟು ಪರಿಣಾಮಕಾರಿಯಾಗಿ ವರದಿ (?) ಬಿತ್ತರಗೊಳ್ಳುತ್ತದೆ.
ನಿಮ್ಮ ಕೋಮಲ ಹೃದಯಗಳು ಕಲುಷಿತಗೊಳ್ಳದಿರಿ..ನಮ್ಮ ಸಮಾಜದ ಕಹಿಸತ್ಯಗಳು ನಿಮಗೆ ಗೊತ್ತಾಗಬಾರದು ಎನ್ನಲಾರೆವು..ಅವೆಲ್ಲವನ್ನೂ ನೀವು ಸಾಕ್ಷೀಕರಿಸಿಕೊಂಡರೆಸಾಕು. ವಿಷಕಂಠರಾಗಲು ಇಂದು ಈಶ್ವರರಾರೂ ಇಲ್ಲಿಲ್ಲ. ವಿಷಜಂತುಗಳು ಸಾಕಷ್ಟು ನಿಮ್ಮಂಥವರು ಮೈಮರೆಯುವುದಕ್ಕೇ ಕಾಯುತ್ತಿರುತ್ತವೆ. ಸ್ವಚ್ಛಂದ ಪಕ್ಷಿಗಳನ್ನು ಹಿಡಿದು ತಿನ್ನುವ ಜಂತುಗಳಿಗೂ ಇಂದು ಪೋಷಕರಿದ್ದಾರೆ.
ಮೊನ್ನೆ ಮೊನ್ನೆ ಜೀವ ಕಳೆದುಕೊಂಡ ಮೂಲ್ಕಿಯ ಆ ಅಶ್ವಿನಿಯೇ ನಮಗೆ ನಿದರ್ಶನವಾಗಬೇಕು. ಪುತ್ತೂರಿನ ಸೌಮ್ಯಭಟ್ ಹಳೆಯ ನಿದರ್ಶನವಾದವಳು. ಇಂದು ತನ್ನದನ್ನು ಕಳೆದುಕೊಂಡು ಸಮಾಜದ ದೂಷಣೆಗೆ ಬೆದರಿ ಜೀವಕಳೆದುಕೊಂಡಿದ್ದಾಳೆ ಆ 15ರ ಪೋರಿ...ಕಣ್ಣುಗಳಲ್ಲಿದ್ದ ಅಪಾರ ಕನಸುಗಳೆಲ್ಲ ಸಾಕಾರಗೊಳ್ಳಲು ವಿಷಜಂತುಗಳು ಬಿಡಲಿಲ್ಲ...ಆದ ಘಟನೆಯನ್ನೇ ಬೇರೆ ರೀತಿಯಲ್ಲಿ ಚಿತ್ರಿಸಿ ಸಮಾಜದ ದಿಕ್ಕುತಪ್ಪಿಸಲು ಪ್ರಜಾಪ್ರಭುತ್ವದ ನಾಲ್ಕನೇ ಆಧಾರಸ್ತಂಭಗಳೂ ಕಾತರಗೊಂಡಿವೆ. ಬಾಲೆಯೊಬ್ಬಳ ಸಾವಿನ ಮನೆಯಲ್ಲೂ ಹೋಗಿ ಮೈಕ್ ಹಿಡಿದು ರಾಜಕೀಯ ಮಾತಾಡಲು ಟಿವಿ ಚಾನೆಲೊಂದು ಹೋಗಿ ಉಗಿಸಿಕೊಂಡು ಬಂದಿದೆ. ಸತ್ತವಳು ಹೋಗಲಿ, ಆರೋಪಿಗೆ ಹೊಡೆದರೆ ನೋವಾಗುತ್ತದೆ ಪಾಪ...ಎಂದು ಮಾತನಾಡುವವರೇ ಇಲ್ಲಿ ಜಾಸ್ತಿ!
ಸೋದರಿಯರೇ...ಎಲ್ಲಾದ್ರೂ ಕೇಳಿದ್ದೀರಾ?
ಆ ಅಶ್ವಿನಿಯ ತಂದೆ ಆಕೆಯನ್ನು ಬೈದಿದ್ದರಿಂದಲೇ ಆಕೆ ಸತ್ತು ಹೋಗಿದ್ದಾಳೆ ಎಂದು ನಮ್ಮಲ್ಲಿ ಛೀಮಾರಿ ಹಾಕುವವರಿದ್ದಾರೆ, ಪಬ್ಬಲ್ಲಿ ನಾಲ್ಕು ಏಟು ತಿಂದ ಹುಡುಗಿಯರಿಗೆ ಈಗಲೂ ಬೆಂಗಾವಲು ಪಡೆಯಿದೆ. ಮಂಗಳೂರು ಅದಕ್ಕಾಗಿಯೇ ತಾಲಿಬಾನ್ ಆಗಿದೆ, ನಾಲ್ಕಾರು ವಿಚಾರಣೆಗಳು ನಡೆದಿವೆ....ಇದುವರೆಗೆ ಅಶ್ವಿನಿಗಾಗಿ ನಾಲ್ಕು ಹನಿ ಕಣ್ಣೀರಾದರೂ ಬಿತ್ತೇ ನಮ್ಮ ಸಮಾಜದಿಂದ...ಇಲ್ಲ...ಬೀಳಲಾರದು...ಮೇಲ್ವರ್ಗದವರ ನೋವಿಗೆ ಮಾತ್ರ ಕಣ್ಣೀರಿನ ಮೀಸಲಾತಿ ಇದೆ...
ಇನ್ನಾದರೂ ಅರ್ಥ ಮಾಡಿಕೊಳ್ಳಿ...ನಿಮ್ಮ ಕನಸಿನಲ್ಲೂ ಒಂದು ಮಿತಿಯಿರಲಿ...ಸ್ವಾತಂತ್ರ್ಯವಿರಲಿ, ನಿಮ್ಮ ಮೇಲೆ ನಿಮಗೆ ಒಂದು ಕಣ್ಣಿರಲಿ...ಗಡಿಬಿಡಿ...ಹೊಟ್ಟೆಪಾಡು ಇದರ ನಡುವೆ ನಿಮ್ಮ ಹೆತ್ತವರಿಗೆ ಸದಾ ನಿಮ್ಮ ಮೇಲೆ ಕಣ್ಣಿಡಲಾಗದು...ಹದ್ದುಗಳು, ಕಾಗೆಗಳು ಹರಿದುಮುಕ್ಕುವುದಕ್ಕೆ ಸಿದ್ಧವಾಗಿವೆ....ಎಚ್ಚರವಾಗಿರಿ...
ಹ್ಯಾವ್ ಎ ಸೇಫ್ ಹ್ಯಾಪಿ ವ್ಯಾಲಂಟೈನ್ಸ್ ಡೇ..
ಹೆಸರಿಲ್ಲದ....ಆದರೆ ನೇರ ಪ್ರಾಮಾಣಿಕ ನುಡಿಯ ಅಣ್ಣಂದಿರ ಆಶೀರ್ವಾದಗಳು ನಿಮ್ಮ ಮುಂಗುರಳ ಮೇಲಿವೆ.......ಎಲೆಗಳ ಮೇಲಿನ ಇಬ್ಬನಿಗಳಂತೆ...
8 comments:
nice post..keep giving the otherside of the truth-
sanjay
NERA MATU
-- prasad
ನೇರ ನುಡಿಯವರೆ,
ಅಶ್ವಿನಿಯ ಕತೆ ಕೇಳಿ ಕಣ್ಣಂಚಲ್ಲಿ ನೀರು.....
ಇಂದಿನ ಯುವ್ ಪೀಳಿಗೆಗೆ ನಿಮ್ಮ ಕಿವಿಮಾತು...
ಒಟ್ಟಾರೆ ನಿಮ್ಮ ಬರಹ ಸೊಗಸಾಗಿದೆ...ಇಷ್ಟವಾಯಿತು...
ನೀವು ನನ್ನ ಬ್ಲಾಗಿಗೆ ಬಂದು ಕಾಮೆಂಟ್ ಮಾಡಿದ್ದು ಖುಷಿಯಾಯಿತು.....ನಾನು ಉಳಿದ ಲೇಖನವನ್ನು ಬಿಡುವು ಮಾಡಿಕೊಂಡು ಓದುತ್ತೇನೆ...ನೀವು ಬಿಡುವು ಮಾಡಿಕೊಂಡು ನನ್ನ ಉಳಿದ ಲೇಖನಗಳನ್ನು ಓದಿ...ಥ್ಯಾಂಕ್ಸ್...
ನೇರನುಡಿ,
ನಿಮ್ಮ ಲೇಖನದೊಳಗಿನ ಸಹೃದಯದ ಆಶಯ ಇಷ್ಟವಾಯಿತು. ಇಂತಹ ಕಿವಿಮಾತು ಕಿವಿಗಳಿಗಿಂಪಾಗಿಸಲು ಅದನ್ನು ನೇರವಾಗಿ ಸ್ವೀರಕರಿಸುವ ಮನಸ್ಥಿತಿ ಬೇಕು. ರೇಣುಕಾರಂತಹ ಮಹಿಳಾ ಮತ್ತು ಮಕ್ಕಳ ಇಲಾಖಾ ಮಂತ್ರಿ ನಮ್ಮನಾಳುವವರೆಗೆ ಎದೆಷ್ಟು ಅಶ್ವಿನಿಯರು ಬಲಿಯಾಗುತ್ತಾರೋ ಕಾಣೆ.
ಅಂದಹಾಗೆ ಅಶ್ವಿನಿಗೆ ಏನಾಗಿತ್ತು? ವಿಷಯದ ಸ್ಪಷ್ಟತೆ ಆಗಲಿಲ್ಲ. ಇಲ್ಲಿ ಕೆಟ್ಟ ಕುತೂಹಲವಿಲ್ಲ. ಕೇವಲ ಸಹಾನುಭೂತಿ ಅಷ್ಟೇ. ದುರ್ಮರಣಕ್ಕೀಡಾದ ಆಕೆಗೆ ನನ್ನ ಕಡೆಯಿಂದಲೂ ಮೌನ ಶ್ರದ್ಧಾಂಜಲಿ.
realy..
you
are..
"NERA.. NUDI.."
ishatavaayitu..
abhinaMdanegaLu..
ನೇರ ನುಡಿ.. ಸರಿಯಾದ ನುಡಿ..
ನೇರ ನುಡಿಗೆ ತಡವಾಗಿ ಬಂದಿದ್ದಕ್ಕೆ ಕ್ಷಮೆಯಿರಲಿ...
ನಿಜವಾಗಲೂ ನೇರ-ನುಡಿ...ಇದು ಹೀಗೇ ಮುಂದುವರೆಯಲಿ. ನಿಮ್ಮ ಈ 'ಸಹೃದಯಿ ' ಪತ್ರ ನೋಡಿ ಮನಸ್ಸು ಖುಷಿಗೊಂಡಿತ್ತು. ಹೌದು, ಅಣ್ಣಂದಿರೇ..ಅಸಂಖ್ಯ ಅಶ್ವಿನಿಯರಿಗೆ ನೀವು ಬರೆದ ಪತ್ರ....ಹಿತನುಡಿಯಾದೀತು. ಸೌಮ್ಯ ಭಟ್ ಕೊಲೆ, ಆವಾಗಿನ ಗಲಭೆ, ನಾವು ತಿಂಗಳುಗಟ್ಟಲೆ ಸ್ಕೂಲಿಗೆ ಹೋಗದೆ ಅಲೆದಾಡಿದ್ದು..! ಆದರೂ ಆ ಭೂಪನಿಗೆ ಇನ್ನೂ ಶಿಕ್ಷೆಯಾಗಲಿಲ್ಲ..! ಅಶ್ವಿನಿ ಪ್ರಕರಣವನ್ನೂ ತನಿಖೆಗೆ ಒಪ್ಪಿಸಿದ್ದಾರೆ..ಏನಾಗುತ್ತೋ..ಆದರೆ ಈ ತನಿಖೆ, ವಿಚಾರಣೆ, ಅಮಾಯಕರಿಗೆ ನ್ಯಾಯ ಸಿಗುತ್ತೆ ಅನ್ನೋದ್ರಲ್ಲಿ ನಂಬಿಕೆಯಿಲ್ಲ.
-ಪ್ರೀತಿಯಿಂದ,
ಚಿತ್ರಾ
well said sirrr
Post a Comment